ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ನೂತನ ಶಾಸಕ ಅಶೋಕ್ ರೈ ಹೇಳಿಕೆ : ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡಲು ಒತ್ತಡ ಹಾಕಿದವರ ಹೆಸರು ಹೊರ ಬಂದರೆ ರಾಜಕೀಯ ವಲಯದಲ್ಲಿ ಸಂಚಲನ - ಲಿಸ್ಟ್ ಹೊರ ಬಂದರೆ ರಾಜ್ಯದಲ್ಲಿ ಬಹುತೇಕ ಎಂಪಿ ಸೀಟ್ ಕಾಂಗ್ರೆಸ್ ತೆಕ್ಕೆಗೆ - ಈ ಸವಾಲು ಸ್ವೀಕಾರಿಸುತ್ತಾ ಕಾಂಗ್ರೇಸ್..?
ಎರಡು ದಿನದಲ್ಲಿ ಒತ್ತಡ ಹಾಕಿದವರ ಹೆಸರು ಬಹಿರಂಗಪಡಿಸುವೆ: ಶಾಸಕ ಅಶೋಕ್ ರೈ ಪುತ್ತೂರು: ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿರುವ ಆರೋಪಿಗಳಿಗೆ ಡಿವೈಎಸ್ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ, ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಈ ಒಂದು ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆ ಒಂದು ಕಾಲ್ ಲಿಸ್ಟ್ ಹೊರ ಬಂದರೆ ಹಲವು ಮುಖಗಳು ಹೊರಬರಲಿದ್ದು, ಇದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಇನ್ನೆರಡು ಅವಧಿ ಯಾವೂದೇ ಹಿಂದೂತ್ವದ ಹೇಳಿಕೆಗಳಿಂದ ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸವಾಲು ಸ್ವೀಕರಿಸಿ ಅಶೋಕ್ ರೈ ಹೆಸರು ಬಹಿರಂಗ ಪಡಿಸುತ್ತಾರ ಎಂದು ಕಾದು ನೋಡಬೇಕಾಗಿದೆ. ಈ ಒಂದು ಲಿಸ್ಟ್ ಹೊರ ಬಂದರೆ ಹಲವು ಪ್ರಕರಣಗಳು ರೀ ಓಪನ್ ಆಗಲಿದೆ. ಇದರ ಜೊತೆ ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಎಂಪಿ ಚುನಾವಣೆಗೆ ಪ್ರಬಲ ಅಸ್ತ್ರ ಕಾಂಗ್ರೇಸ್ ಕೈಯಲ್ಲಿ ಇರಲಿದೆ. ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ಸಿನವರೇ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ ಕಲ್ಲ